ಕಲ್ಲೇರಿ ಶಿವಗಿರಿ ‘ಇರೋಳು’ ವ್ಯಾಪಾರಿ ಆತ್ಮಹತ್ಯೆ

ಕಲ್ಲೇರಿ ಶಿವಗಿರಿ ‘ಇರೋಳು’ ವ್ಯಾಪಾರಿ ಆತ್ಮಹತ್ಯೆ

Share
IMG-20250313-WA0001-576x1024 ಕಲ್ಲೇರಿ ಶಿವಗಿರಿ 'ಇರೋಳು' ವ್ಯಾಪಾರಿ ಆತ್ಮಹತ್ಯೆ

ಬೆಳ್ತಂಗಡಿ : ಕರಾಯ ಗ್ರಾಮದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೇರುಕಟ್ಗೆ ಸಮೀಪ ಗುರುವಾರ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಶಿವಗಿರಿ ಸಮೀಪದ ನಿವಾಸಿ
ರವಿ ಯಾನೆ ವಾಸುದೇವ ನಾಯ್ಕ (44 ವರ್ಷ) ಎಂಬವರು ಕಳಿಯ ಗ್ರಾಮದ ಗೇರುಕಟ್ಟೆ ಸಮೀಪದ ‘ಸುಮ ನರ್ಸರಿ’ ಎದುರಿನ ಖಾಸಗಿ ವ್ಯಕ್ತಿಯೊಬ್ಬರ ಗೇರುತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಮೃತರು ಪತ್ನಿ , 2 ಮಕ್ಕಳನ್ನೊಳಗೊಂಡು ಕುಟುಂಬದ ಬಂಧುಗಳನ್ನು ಅಗಲಿದ್ದಾರೆ.
ಇವರು ಕಲ್ಲೇರಿ ಶಿವಗಿರಿ ಹಾಗೂ ಗೇರುಕಟ್ಟೆ ಸಮೀಪದ ರಸ್ತೆ ಬದಿಯಲ್ಲಿ ಇರೋಳು ವ್ಯಾಪಾರ ನಡೆಸುತ್ತಿದ್ದರು. ವ್ಯಾಪಾರದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂದು ಸಂಬಂಧಿಕರು ತಿಳಿಸುತ್ತಿದ್ದಾರೆ.
ವಿಷಯ ತಿಳಿದು ಬೆಳ್ತಂಗಡಿ ಆರಕ್ಷಕ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

Post Comment

ಟ್ರೆಂಡಿಂಗ್‌

error: Content is protected !!