ಧರ್ಮಸ್ಥಳ ನೂರಾರು ಶವಗಳ ಕಾನೂನು ಬಾಹಿರ ದಫನ ಪ್ರಕರಣ : 2003ರಲ್ಲಿ ಧರ್ಮಸ್ಥಳದಿಂದ ನಾಪತ್ತೆಯಾದ ಅನನ್ಯ ಭಟ್ ತಾಯಿಯಿಂದ ದ.ಕ.ಎಸ್.ಪಿ.ಗೆ ದೂರು

ಬೆಳ್ತಂಗಡಿ : 2003ರಲ್ಲಿ ಧರ್ಮಸ್ಥಳದಿಂದ ನಿಗೂಢ ನಾಪತ್ತೆಯಾದ ಮೆಡಿಕಲ್ ವಿದ್ಯಾರ್ಥಿನಿ ಅನನ್ಯ ಭಟ್ ತಾಯಿ ಸುಜಾತ ಭಟ್ ಮಂಗಳವಾರ (ಜುಲೈ 15) ಇಂದು ಸಂಜೆ ತಮ್ಮ ಮಗಳ ಸಾವಿಗೆ ನ್ಯಾಯಕ್ಕಾಗಿ ವಕೀಲರಾದ ಮಂಜುನಾಥ್ ಎನ್ ಅವರ ಮೂಲಕ ದೂರು ನೀಡಿದ್ದಾರೆ.
ಅವರು ತಮ್ಮ ಮಗಳು ಧರ್ಮಸ್ಥಳದಲ್ಲಿ ನಾಪತ್ತೆಯಾಗಿ ಶವವಾಗಿರುವ ಕುರಿತು ಮತ್ತು ತಮ್ಮ ಮಗಳ ಅಸ್ತಿ ಪಂಜರ ಹುಡುಕಿ ಕೊಡುವಂತೆ ಎಸ್.ಪಿ.ಗೆ ನೀಡಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಧರ್ಮಸ್ಥಳದಿಂದ
2003ರಲ್ಲಿ ನಿಗೂಢವಾಗಿ ನಾಪತ್ತೆಯಾದ ಮೆಡಿಕಲ್ ವಿದ್ಯಾರ್ಥಿನಿ ಅನನ್ಯ ಭಟ್ ತಾಯಿ ಸುಜಾತ ಭಟ್ ಪರ ವಕೀಲರಾದ ಮಂಜುನಾಥ್ ಎನ್ ಅವರ ಮೂಲಕ ದ.ಕ. ಎಸ್.ಪಿ. ಗೆ ದೂರು ನೀಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸುಜಾತ ಭಟ್ ತಮ್ಮ ಮಗಳ ನಿಗೂಢ ನಾಪತ್ತೆ ಪ್ರಕರಣ ತನಿಖೆಯಾಗಬೇಕು , ನನಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.
Post Comment