ಉಪ್ಪಿನಂಗಡಿ : ಖಾಸಗಿ ಬಸ್ಸಲ್ಲಿ ಸಿಕ್ಕಿದ ಚಿನ್ನದುಂಗುರವನ್ನು ವಾರಸುದಾರರ ಕೈಗೊಪ್ಪಿಸಿದ ಬಸ್ ಚಾಲಕ-ಮಾಲಕ

ಉಪ್ಪಿನಂಗಡಿ : ಖಾಸಗಿ ಬಸ್ಸಲ್ಲಿ ಸಿಕ್ಕಿದ ಚಿನ್ನದುಂಗುರವನ್ನು ವಾರಸುದಾರರ ಕೈಗೊಪ್ಪಿಸಿದ ಬಸ್ ಚಾಲಕ-ಮಾಲಕ

Share
IMG_20251004_112348 ಉಪ್ಪಿನಂಗಡಿ : ಖಾಸಗಿ ಬಸ್ಸಲ್ಲಿ ಸಿಕ್ಕಿದ ಚಿನ್ನದುಂಗುರವನ್ನು ವಾರಸುದಾರರ ಕೈಗೊಪ್ಪಿಸಿದ ಬಸ್ ಚಾಲಕ-ಮಾಲಕ

ಮಾನವೀಯತೆ ಮೆರೆದ ಖಾಸಗಿ ಬಸ್ ಮಾಲಕ ಮತ್ತು ಚಾಲಕ

ಬೆಳ್ತಂಗಡಿ : ಅಕ್ಟೋಬರ್ 2ನೇ ಗುರುವಾರದಂದು ಉಪ್ಪಿನಂಗಡಿ – ಕಕ್ಯಪದವು ಮಧ್ಯೆ ಸಂಚರಿಸುವ “JEEVAN JYOTHI”
(ಜೀವನ್ ಜ್ಯೋತಿ)ಖಾಸಗಿ ಬಸ್ಸಿನಲ್ಲಿ ಚಿನ್ನದ ಉಂಗುರವೊಂದು ಬಸ್ ಮಾಲೀಕರಾದ ಅಝೀಝ್ ಅವರ ಕಣ್ಣಿಗೆ ಬಿತ್ತು.
ಚಿನ್ನವನ್ನು ಹೆಕ್ಕಿಕೊಂಡು ಆ ರಸ್ತೆಯಲ್ಲಿ ಪ್ರಯಾಣಿಸುವ ಹಲವರನ್ನು ಸಂಪರ್ಕಿಸಿ ಚಿನ್ನದ ವಾರಿಸುದಾರರನ್ನು ಪತ್ತೆಹಚ್ಚಲು ಹುಡುಕಾಡಲು ಶುರು ಮಾಡಿದರು.
ಕೆಲವೇ ಗಂಟೆಗಳಲ್ಲಿ ಕಳೆದುಕೊಂಡ ಚಿನ್ನದ ವಾರಿಸುದಾರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಬಸ್ ಚಾಲಕ ಮಹಮ್ಮದ್ ಹಾಗೂ ಬಸ್ ಮಾಲೀಕರು ಚಿನ್ನವನ್ನು ವಾಪಾಸ್ ಮರಳಿಸಿದ ಪ್ರಸಂಗ ನಡೆಯಿತು.

IMG_20251004_110442 ಉಪ್ಪಿನಂಗಡಿ : ಖಾಸಗಿ ಬಸ್ಸಲ್ಲಿ ಸಿಕ್ಕಿದ ಚಿನ್ನದುಂಗುರವನ್ನು ವಾರಸುದಾರರ ಕೈಗೊಪ್ಪಿಸಿದ ಬಸ್ ಚಾಲಕ-ಮಾಲಕ

ಬಸ್ಸಿನಲ್ಲಿ ಪ್ರಯಾಣಿಸುವವರು ಮನೆಗೆ ಬರುವ ಅತಿಥಿಗಳಂತೆ ಎಂದು ಭಾವನೆಯಿಂದ ಯಾರೋ ಕಳೆದುಕೊಂಡ ಚಿನ್ನದುಂಗುರವನ್ನು ವಾರಸುದಾರರನ್ನು ಹುಡುಕಿ ಗೌರವಯುತವಾಗಿ ಅವರ ಕೈಗೊಪ್ಪಿಸುವ ಮೂಲಕ ಮಾನವೀಯತೆ ಮೆರೆದ ಉಪ್ಪಿನಂಗಡಿ-ಕಕ್ಯಪದವು
‘ಜೀವನ್ ಜ್ಯೋತಿ’ ಬಸ್ ಚಾಲಕ ಮತ್ತು ಮಾಲಕರ ಬಗ್ಗೆ ಪ್ರಯಾಣಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ಇದೇ ರೂಟ್ ನಲ್ಲಿ ಸಂಚರಿಸುವ ‘ಜೀವನ್ ಜ್ಯೋತಿ’ ಬಸ್ ಎಂದರೆ ಪ್ರಯಾಣಿಕರಿಗೆ ಅಚ್ಚು ಮೆಚ್ಚು, ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆ , ಭದ್ರತೆ ನಮ್ಮ ಜವಾಬ್ದಾರಿ ಎಂಬ ಭಾವನೆ ಹೊಂದಿರುವ ಹೊಂದಿರುವ ಈ ಖಾಸಗಿ ಬಸ್ಸಿನ ಚಾಲಕ ಮತ್ತು ಮಾಲಕರಿಗೆ ಚಿನ್ನದ ವಾರಸುದಾರರು ಕೈಜೋಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!