ಮೈಸೂರು ಬಳಿ ನದಿಯಲ್ಲಿ ನಡೆದ ದುರಂತದಲ್ಲಿ ಬೆಳ್ತಂಗಡಿಯ ಯುವಕ ಸಾವು

ಮೈಸೂರು ಬಳಿ ನದಿಯಲ್ಲಿ ನಡೆದ ದುರಂತದಲ್ಲಿ ಬೆಳ್ತಂಗಡಿಯ ಯುವಕ ಸಾವು

Share
IMG-20250418-WA0001 ಮೈಸೂರು ಬಳಿ ನದಿಯಲ್ಲಿ ನಡೆದ ದುರಂತದಲ್ಲಿ ಬೆಳ್ತಂಗಡಿಯ ಯುವಕ ಸಾವು

ಬೆಳ್ತಂಗಡಿ : ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನದಿಯಆಳದ ಗುಂಡಿಗೆ ಬಿದ್ದ ಪರಿಣಾಮ ಬೆಳ್ತಂಗಡಿ ತಾಲೂಕಿನ ಯುವಕನೊಬ್ಬ ಮೃತಪಟ್ಟ ಇಂದು ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.
ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುದುರು ನಿವಾಸಿಯಾಗಿದ್ದು ಮನ್ಸೂರ್ (19) ಎಂಬಾತ ತನ್ನ ಕೋಳಿ ಸಾಗಾಟ ವಾಹನದಲ್ಲಿ ದುಡಿಯುತ್ತಿದ್ದ ಇಬ್ಬರು ಸಹೋದ್ಯೋಗಿಗಳ ಜೊತೆಗೆ ನಿನ್ನೆ ರಾತ್ರಿ ಟಿ.ನರಸೀಪುರ ತಾಲೂಕಿನ ಬನ್ನೂರು ನಲ್ಲಿ ತಂಗಿದ್ದರು.
ಶುಕ್ರವಾರ ಬೆಳಿಗ್ಗೆ ಸ್ಥಳೀಯ ಕಾವೇರಿ ನದಿಯಲ್ಲಿ ವಾಹನ ತೊಳೆದು , ಸ್ನಾನ ಮಾಡಲು ತೆರಳಿದ್ದು ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಮನ್ಸೂರ್ ಎಂಬಾತ ಕಾಲು ಜಾರಿ ಬಾರಿ ಗುಂಡಿಗೆ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಬನ್ನೂರು ಪೊಲೀಸರು ಮೃತದೇಹವನ್ನು ಬನ್ನೂರು ತಾಲೂಕು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಿದ್ದು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಬಿಟ್ಟುಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


IMG-20250413-WA0001-3-792x1024 ಮೈಸೂರು ಬಳಿ ನದಿಯಲ್ಲಿ ನಡೆದ ದುರಂತದಲ್ಲಿ ಬೆಳ್ತಂಗಡಿಯ ಯುವಕ ಸಾವು
IMG-20250413-WA0003-4-682x1024 ಮೈಸೂರು ಬಳಿ ನದಿಯಲ್ಲಿ ನಡೆದ ದುರಂತದಲ್ಲಿ ಬೆಳ್ತಂಗಡಿಯ ಯುವಕ ಸಾವು

Post Comment

ಟ್ರೆಂಡಿಂಗ್‌

error: Content is protected !!