ಮಂಗಳೂರು ‘ಇನ್ನರ್ ವೀಲ್ ಕ್ಲಬ್ ‘ ಮಂಗಳೂರು ದಕ್ಷಿಣ, ನಾಗರಿಕ ಸೇವಾ ಸಮಿತಿ (ರಿ) ಆಶ್ರಯದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

ಮಂಗಳೂರು ‘ಇನ್ನರ್ ವೀಲ್ ಕ್ಲಬ್ ‘ ಮಂಗಳೂರು ದಕ್ಷಿಣ, ನಾಗರಿಕ ಸೇವಾ ಸಮಿತಿ (ರಿ) ಆಶ್ರಯದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

Share
InShot_20250723_122900576-1024x1015 ಮಂಗಳೂರು 'ಇನ್ನರ್ ವೀಲ್  ಕ್ಲಬ್ ' ಮಂಗಳೂರು ದಕ್ಷಿಣ, ನಾಗರಿಕ ಸೇವಾ ಸಮಿತಿ (ರಿ) ಆಶ್ರಯದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

ಮಂಗಳೂರು : ಇನ್ನರ್ ವೀಲ್ ಕ್ಲಬ್ ಮಂಗಳೂರು ದಕ್ಷಿಣ ಮತ್ತು
ನಾಗರಿಕ ಸೇವಾ ಸಮಿತಿ (ರಿ) ಅಂಬೇಡ್ಕರ್ ನಗರ ಇವರ ಆಶ್ರಯದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವು ‘ನಮ್ಮ ಕ್ಲಿನಿಕ್’ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಇನ್ನರ್ ವೀಲ್ ಮಂಗಳೂರು ದಕ್ಷಿಣದ ಅಧ್ಯಕ್ಷರಾದ ಶೀಜಾ ನಂಬಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಭಾಗವಹಿಸಿದ 66 ಜನರಿಗೆ ಉಚಿತ ಕನ್ನಡಕವನ್ನು ನೀಡಿದ್ದೇವೆ, ತುಂಬಾ ಸಂತಸ ತಂದಿದೆ ಮತ್ತು ಮನಸ್ಸಿಗೆ ತೃಪ್ತಿ ನೀಡಿದೆ. ಇನ್ನಷ್ಟು ಸಮಾಜ ಸೇವೆ ಮಾಡಲು ಸ್ಫೂರ್ತಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷರಾದ ಭೋಜರಾಜ್ ಕೋಟ್ಯಾನ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ‘ನಮ್ಮ ಕ್ಲಿನಿಕ್ ‘ ನ ವೈದ್ಯಾಧಿಕಾರಿ ಕು. ಸಮೀಕ್ಷಾ ಡಿ. ಪಿ. ಮಾತನಾಡಿ ನಾಗರೀಕ ಸೇವಾ ಸಮಿತಿ ಮತ್ತು ಇನ್ನರ್ ವಿಲ್ ಕ್ಲಬ್ ನವರು ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ಮಾಡಿದ್ದು ಒಳ್ಳೆಯ ಕೆಲಸವಾಗಿದೆ. ಇದರಿಂದ ತುಂಬಾ ಜನರಿಗೆ ಪ್ರಯೋಜನವಾಗಿದ್ದು ಇದು ಸಮಾಜಕ್ಕೆ ಮಾದರಿ ಕಾರ್ಯಕ್ರಮವಾಗಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದು ಆಶಿಸಿದರು.

IMG-20250722-WA0016-1024x768 ಮಂಗಳೂರು 'ಇನ್ನರ್ ವೀಲ್  ಕ್ಲಬ್ ' ಮಂಗಳೂರು ದಕ್ಷಿಣ, ನಾಗರಿಕ ಸೇವಾ ಸಮಿತಿ (ರಿ) ಆಶ್ರಯದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

ಈ ಸಂದರ್ಭ ವೇದಿಕೆಯಲ್ಲಿ ಇನ್ನರ್ ವಿಲ್ ಕ್ಲಬ್ ನ ಕಾರ್ಯದರ್ಶಿ ಕಲಾವತಿ, ಇನ್ನರ್ ವಿಲ್ ಕ್ಲಬ್ ನ ಮಾಜಿ ಅಧ್ಯಕ್ಷೆ ಶಬರಿ ಭಂಡಾರಿ,
ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಸಯ್ಯದ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ
ಯುವವಾಹಿನಿ ಕೆಂಜಾರು ಕರಂಬಾರು ಸಂಘಟನಾ ಕಾರ್ಯದರ್ಶಿ ಮಾಧವ ಅಮೀನ್ ಕೆಂಜಾರು, ಗ್ರಾಮಪಂಚಾಯತ್ ಮಾಜಿ ಸದಸ್ಯರಾದ ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 66 ಅರ್ಹರಿಗೆ ಉಚಿತ ಕನ್ನಡಕ ವಿತರಿಸಲಾಯಿತು.
ರಾಕೇಶ್ ಕುಂದರ್ ಕಾರ್ಯಕ್ರಮ ನಿರೂಪಿಸಿ ವಿನಯ್ ಸಾಲ್ಯಾನ್ ಸ್ವಾಗತಿಸಿ ನವೀನ್ ಚಂದ್ರ ಸಾಲ್ಯಾನ್ ವಂದಿಸಿದರು.

IMG-20250722-WA0014-1024x768 ಮಂಗಳೂರು 'ಇನ್ನರ್ ವೀಲ್  ಕ್ಲಬ್ ' ಮಂಗಳೂರು ದಕ್ಷಿಣ, ನಾಗರಿಕ ಸೇವಾ ಸಮಿತಿ (ರಿ) ಆಶ್ರಯದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

Post Comment

ಟ್ರೆಂಡಿಂಗ್‌

error: Content is protected !!