ಎಸ್ ಐ ಟಿಗೆ ಪ್ರಬಲ ಶಕ್ತಿ ತುಂಬಲು ಶ್ರದ್ಧಾ ಕೇಂದ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಮಹೇಶ್ ಶೆಟ್ಟಿ ತಿಮರೋಡಿ ಕರೆ

ಎಸ್ ಐ ಟಿಗೆ ಪ್ರಬಲ ಶಕ್ತಿ ತುಂಬಲು ಶ್ರದ್ಧಾ ಕೇಂದ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಮಹೇಶ್ ಶೆಟ್ಟಿ ತಿಮರೋಡಿ ಕರೆ

Share
IMG_20250913_124707-612x1024 ಎಸ್ ಐ ಟಿಗೆ ಪ್ರಬಲ ಶಕ್ತಿ ತುಂಬಲು ಶ್ರದ್ಧಾ ಕೇಂದ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಮಹೇಶ್ ಶೆಟ್ಟಿ ತಿಮರೋಡಿ ಕರೆ

ಬೆಳ್ತಂಗಡಿ : ಧರ್ಮಸ್ಥಳ ಸರಣಿ ಸಮಾಧಿ ಪ್ರಕರಣದ ಎಸ್ ಐ ಟಿಯ ಸತ್ಯಪರ ತನಿಖೆಗೆ ಪ್ರಬಲ ಶಕ್ತಿ ತುಂಬಲು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಂತೆ ಸೌಜನ್ಯಪರ ಹೋರಾಟಗಾರರಿಗೆ ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಪಿ ತಿಮರೋಡಿ ಕರೆ ನೀಡಿದ್ದಾರೆ.

ಈ ಬಗ್ಗೆ ಪ್ರಜಾಪ್ರಭುತ್ವ ವೇದಿಕೆಯ ಕಚೇರಿಯಲ್ಲಿ ಮಾತನಾಡಿ ವೀಡಿಯೋ ಹಂಚಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ ಕರ್ನಾಟಕ ರಾಜ್ಯ ಸರಕಾರ ಮಾನ್ಯ ಸಿದ್ದರಾಮಯ್ಯ ಮತ್ತು ಗೃಹಮಂತ್ರಿ ಜಿ.ಪರಮೇಶ್ವರ್ ಮುತುವರ್ಜಿಯಲ್ಲಿ ಎಸ್ ಐ ಟಿ ತನಿಖೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ, ಎಸ್ ಐ ಟಿ ತನಿಖೆಯನ್ನು ನಾವು ಸ್ವಾಗತಿಸಿದ್ದೇವೆ, ಅಧರ್ಮೀಯರು ಧರ್ಮದ ಹೆಸರಲ್ಲಿ ಎಸ್ ಐ ಟಿ ತಂಡವನ್ನು ದುರ್ಬಲ ಮಾಡಲು ಹೊರಟಿದ್ದಾರೆ.
ದುಷ್ಟ ಶಕ್ತಿಗಳ ಹುನ್ನಾರವನ್ನು ಮೆಟ್ಟಿ ನಿಲ್ಲಲು ಎಸ್ ಐ ಟಿ ತಂಡಕ್ಕೆ ಪ್ರಬಲವಾದ ಶಕ್ತಿ ತುಂಬಲು ನಾವು ರಾಜ್ಯಾದ್ಯಂತ ಕರೆಯನ್ನು ಕೊಡಲಿದ್ದೇವೆ, ಮಹಾತ್ಮಾಗಾಂಧೀಜಿಯವರ ಶಾಂತಿ ಮಂತ್ರದಂತೆ ಲಕ್ಷಾಂತರ ಮಂದಿ ಸೇರಿ ಮೌನ ಪ್ರತಿಭಟನೆ ಮಾಡುವ ಬಗ್ಗೆ ಆದಷ್ಟು ಬೇಗ ದಿನ ನಿಗದಿ ಮಾಡಲಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಈ ನಿಟ್ಟಿನಲ್ಲಿ ಸೆಪ್ಟಂಬರ್ 16- 17 ಸಂಕ್ರಮಣ ದಿನದಂದು ಎಸ್ ಐ ಟಿ ಸತ್ಯಪರ ತನಿಖೆಗೆ ಶಕ್ತಿ ತುಂಬಲು ಎಲ್ಲಾ ಮಠ, ಮಂದಿರ ದೇವಸ್ಥಾನ, ದೈವಸ್ಥಾನಗಳಲ್ಲಿ ದೇವರು ದೈವಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬೇಕೆಂದು ಸತ್ಯ ಧರ್ಮಪರ ಸೌಜನ್ಯಪರ,
ಪ್ರಜಾಪ್ರಭುತ್ವ ವೇದಿಕೆ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ‌ಕಾರ್ಯಕರ್ತರಿಗೆ ವೀಡಿಯೋ ಹಂಚಿಕೊಂಡು ಕರೆ ನೀಡಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!