ನೆರಿಯಾ: ಬೆಂಕಿ ಅವಘಡ, ಮನೆ ಭಸ್ಮ : ಅಪಾರ ನಷ್ಟ

ನೆರಿಯಾ: ಬೆಂಕಿ ಅವಘಡ, ಮನೆ ಭಸ್ಮ : ಅಪಾರ ನಷ್ಟ

Share
IMG_20251007_144012 ನೆರಿಯಾ: ಬೆಂಕಿ ಅವಘಡ, ಮನೆ ಭಸ್ಮ : ಅಪಾರ ನಷ್ಟ

ಬೆಳ್ತಂಗಡಿ : ನೆರಿಯ ಗ್ರಾಮದ ಕಡ್ಡಿಬಾಗಿಲು ಎಂಬಲ್ಲಿ ಹರೀಶ್ ಎಂಬವರ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಉಂಟಾಗಿ ವಾಸದ ಮನೆ ಭಸ್ಮಗೊಂಡು ಅಪಾರ ನಷ್ಟ ಉಂಟಾದ ಘಟನೆ ಸೋಮವಾರ ಸಂಜೆ ನಡೆದಿದ್ದು ಅನಾಹುತದ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಜೀವ ಹಾನಿ ಉಂಟಾಗಿಲ್ಲ ಎಂದು ತಿಳಿದು ಬಂದಿದೆ.
ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ಹರೀಶ್ ಅವರು ಭಜನೆ ತರಬೇತುದಾರರಾಗಿದ್ದು ಅವರು ತಮ್ಮ ತಂಡದೊಂದಿಗೆ ಮುಂಬೈ ಹೋದವರು ಕಾರ್ಯಕ್ರಮ ಮುಗಿಸಿ ಮನೆಗೆ ಬಂದಿದ್ದರು , ಆದರೆ ಘಟನೆ ವೇಳೆ ಮನೆಯಲ್ಲಿ ಇರಲಿಲ್ಲ. ಪತ್ನಿ ಹಾಗೂ ಮಗಳು ತವರು ಮನೆಗೆ ಹೋಗಿದ್ದರು. ಇನ್ನಿಬ್ಬರು ಮಕ್ಕಳು ಹಾಗೂ ತಾಯಿ ಪಕ್ಕದ ಮನೆಯಲ್ಲಿ ಇದ್ದರು. ಸಂಜೆ ವೇಳೆ ಮಕ್ಕಳು ಮನೆಗೆ ತೆರಳಿ ವಾಪಸು ಬಂದಿದ್ದರು.

IMG_20251004_110442-2 ನೆರಿಯಾ: ಬೆಂಕಿ ಅವಘಡ, ಮನೆ ಭಸ್ಮ : ಅಪಾರ ನಷ್ಟ

ಬೆಂಕಿ ಅನಾಹುತ ಉಂಟಾಗಿದೆ ಎಂದು ಬಳಿಕ ಗೊತ್ತಾಗಿದೆ. ಆದರೆ ಮನೆಗೆ ಬೆಂಕಿ ಹೇಗೆ ತಗುಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಹಂಚಿನ ಮೇಲ್ಛಾವಣಿಯ ಮನೆ ಬಹುತೇಕ ಬೆಂಕಿಗೆ ಆಹುತಿಯಾಗಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗ್ರಾಮಪಂಚಾಯತ್ ಸರಬರಾಜಾಗುವ ನಳ್ಳಿ ನೀರಿನ ಮೂಲಕ ಬೆಂಕಿಯನ್ನು ನಂದಿಸಲಾಯಿತು.

Post Comment

ಟ್ರೆಂಡಿಂಗ್‌

error: Content is protected !!