ಇಂದಬೆಟ್ಟು ಖಾಸಗಿ ಜಾಗದಲ್ಲಿ ನಿಧಿ ಶೋಧ

ಬೆಳ್ತಂಗಡಿ : ಖಾಸಗಿ ಜಾಗದಲ್ಲಿ ಅಗೆದು ಗುಂಡಿ ಮಾಡಿ ನಿಧಿಗಾಗಿ ಶೋಧ ನಡೆಸಿದ ಕೃತ್ಯವೊಂದು ಇಂದಬೆಟ್ಟು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ಕಜೆ ಎಂಬಲ್ಲಿನ ಹೊನ್ನಪ್ಪ ಗೌಡ ಎಂಬವರ ಜಾಗದಲ್ಲಿ ಭಾನುವಾರ ರಾತ್ರಿ ದುಷ್ಕರ್ಮಿಗಳು ನಿಧಿಗಾಗಿ ಶೋಧ ನಡೆಸಿದ ಕುರುಹು ಪತ್ತೆಯಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳ ಪರಿಶೀಲನೆ ನಡೆಸಲಿದ್ದಾರೆ.

















Post Comment