ಕುವೆಟ್ಟು: ಅಕ್ರಮ ಗೋಮಾಂಸ ಸಹಿತ ಜಾನುವಾರು ವಶಕ್ಕೆ
ಬೆಳ್ತಂಗಡಿ : ತಾಲೂಕಿನ ಕುವೆಟ್ಟು ಗ್ರಾಮದ ಅರಮಲೆ ಬೆಟ್ಟ ಎಂಬಲ್ಲಿ ಎ7 2024 ರಂದು ಬೆಳಿಗ್ಗೆ, ಬದ್ರುದ್ದೀನ್ ಎಂಬಾತನ ಮನೆಯ ಹಿಂಬದಿಯಲ್ಲಿ, ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ, ಜಾನುವಾರುಗಳನ್ನು ಕೊಂದು ಮಾಂಸ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೆರೆಗೆ, ಮುರಳೀಧರ್ ಕೆ.ಜಿ, ಪೊಲೀಸ್ ಉಪ ನಿರಿಕ್ಷಕರು, (ಕಾ&ಸು), ಬೆಳ್ತಂಗಡಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿಗಳ ತಂಡ ದಾಳಿ ನಡೆಸಿ ಸ್ಥಳದಲ್ಲಿ ಮಾರಾಟ ಮಾಡಲು ಶೇಖರಿಸಿಟ್ಟ ಅಂದಾಜು 87ಕೆ.ಜಿ ದನದ ಮಾಂಸ, ಮಾಂಸಕ್ಕಾಗಿ ಕಡಿದಿದ್ದ 6 ಜಾನುವಾರುಗಳನ್ನು ಹಾಗೂ ಮಾಂಸ ಮಾಡಲು ಉಪಯೋಗಿಸಿದ ಪರಿಕರಗಳು ಕಂಡುಬಂದಿದ್ದು ವಶಕ್ಕೆ ಪಡೆಯಲಾಗಿದೆ.
ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ನಿವಾಸಿ ಅಬ್ದುಲ್ ರಹಿಮಾನ್,(35) ಬೆಳ್ತಂಗಡಿ ನಿವಾಸಿ ಇಕ್ಬಾಲ್, (42) ಎಂಬವರುಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ 48/2024 ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ.
Post Comment