ಸಿಡಿಲು ಬಡಿದು ಧಗ ಧಗ ಉರಿದ ತೆಂಗಿನ ಮರ 

ಸಿಡಿಲು ಬಡಿದು ಧಗ ಧಗ ಉರಿದ ತೆಂಗಿನ ಮರ 

Share
IMG-20240515-WA0013-1 ಸಿಡಿಲು ಬಡಿದು ಧಗ ಧಗ ಉರಿದ ತೆಂಗಿನ ಮರ 

ಬೆಳ್ತಂಗಡಿ : ಬುಧವಾರ ಸಂಜೆ ತಾಲೂಕಿನ ಕೆಲವೆಡೆ  ಮಳೆಯಾಗಿದ್ದು, ಗುರುವಾಯನಕೆರೆಯಲ್ಲಿ ಆಲಿಕಲ್ಲು ಸಹಿತ ಸಾಧಾರಣ ಮಳೆಯಾಗಿದೆ. ಜೊತೆಗೆ  ಹಲವೆಡೆ ಗಾಳಿ ಹಾಗೂ ಸಿಡಿಲಿನ ಅಬ್ಬರದಿಂದ,ತೋಟ ,  ಮನೆಗಳು, ಹಾನಿಗೊಂಡಿವೆ. ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ  ಮೈಂದಕೋಡಿ ಎಂಬಲ್ಲಿನ ಲೋಕಯ್ಯ ಗೌಡ ಎಂಬವರ ಮನೆ ಸಮೀಪದ ತೆಂಗಿನ ಮರವೊಂದಕ್ಕೆ  ಸಿಡಿಲು ಬಡಿದ ಪರಿಣಾಮ ಬೆಂಕಿ ಹೊತ್ತಿ ಉರಿದಿದೆ. ಬಿಸಿಲಿನ ತಾಪಕ್ಕೆ ಎಲ್ಲಾ ನದಿಗಳು ಬತ್ತಿ ಹೋಗಿದ್ದು ನಿನ್ನೆ ರಾತ್ರಿ ಹಾಗೂ ಇಂದು ಬೆಳಗ್ಗೆ ಸುರಿದ ಭಾರೀ ಮಳೆಗೆ ಮೃತ್ಯುಂಜಯ ನದಿ ತುಂಬಿ ಹರಿಯುತಿದೆ. ಕೃಷಿ ತೋಟಗಳಿಗೆ ನೀರಿಲ್ಲದೇ ಕೃಷಿಕರು ಆತಂಕಗೊಂಡಿದ್ದಾರೆ. ಇನ್ನೊಂದೆಡೆ ಮಳೆಗಾಗಿ ಕಾಯುತ್ತಿದ್ದ ಕೃಷಿಕರಲ್ಲಿ  ಮಳೆಯು ಸಂತಸ ಮೂಡಿಸಿದೆ.

Previous post

ಧಾರ್ಮಿಕ ಕೇಂದ್ರಗಳು ಸಹಿಷ್ಣುತೆಯ ಪಾಠ ಶಾಲೆಯಾಗಲಿ : ಮೌಲಾನಾ ಶಾಫಿ ಸ‌ಅದಿ ಕಾಜೂರು ಉರೂಸ್ ಸರ್ವಧರ್ಮೀಯ ಸೌಹಾರ್ದ ಸಂಗಮ ಕಾರ್ಯಕ್ರಮ

Next post

ಕೊಕ್ಕಡ: ಹಲ್ಲೆಯಿಂದ ವ್ಯಕ್ತಿ ಮೃತಪಟ್ಟ ಪ್ರಕರಣ- ಆರೋಪಿ ಪಶು ವೈದ್ಯಕೀಯ  ಪರೀಕ್ಷಕನಿಗೆ ನ್ಯಾಯಾಂಗ ಬಂಧನ

Post Comment

ಟ್ರೆಂಡಿಂಗ್‌