ಬಂಗಾಡಿ: ಡಿ.ಕೆ.ಆರ್.ಡಿ.ಎಸ್.(ರಿ) ವತಿಯಿಂದ  ವನಮಹೋತ್ಸವ  ಆಚರಣೆ : ಪರಿಸರ ಸಂರಕ್ಷಣೆ ಜಾಗೃತಿ

ಬಂಗಾಡಿ: ಡಿ.ಕೆ.ಆರ್.ಡಿ.ಎಸ್.(ರಿ) ವತಿಯಿಂದ  ವನಮಹೋತ್ಸವ  ಆಚರಣೆ : ಪರಿಸರ ಸಂರಕ್ಷಣೆ ಜಾಗೃತಿ

Share
IMG-20240624-WA0001-1-1024x576 ಬಂಗಾಡಿ: ಡಿ.ಕೆ.ಆರ್.ಡಿ.ಎಸ್.(ರಿ) ವತಿಯಿಂದ  ವನಮಹೋತ್ಸವ  ಆಚರಣೆ : ಪರಿಸರ ಸಂರಕ್ಷಣೆ ಜಾಗೃತಿ

ಬೆಳ್ತಂಗಡಿ : ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ ಇದರ ಮಾರ್ಗದರ್ಶನದಲ್ಲಿ ಅರುಣೋದಯ ಮಹಾಸಂಘ ಬೆಳ್ತಂಗಡಿ ಇದರ ನೇತೃತ್ವದಲ್ಲಿ  ವನಮಹೋತ್ಸವ ಆಚರಣೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ  ತರಬೇತಿ ಕಾರ್ಯಕ್ರಮವು ಜೂನ್ 22ರಂದು ಬಂಗಾಡಿ ಮಾರಿಯಂಬಿಕೆ ಶಾಲೆಯಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ವಂ. ಫಾ. ಜೋಸೆಫ್ ಚೀರನ್ ರವರು ಮಾತನಾಡಿ ಗಿಡಗಳನ್ನು ನೆಟ್ಟು ಪೋಷಿಸಿಸುವ ಮೂಲಕ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು. ಇಂದಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ  ಮಾತನಾಡಿ ಪರಿಸರ ಸಂರಕ್ಷಣೆಯಲ್ಲಿ ನಾಗರಿಕರ  ಪಾತ್ರದ ಕುರಿತು ವಿವರಿಸಿದರು.  ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ  ನಿರ್ದೇಶಕರಾದ ವಂ. ಫಾ. ಬಿನೋಯಿ ಎ.ಜೆ. ಅವರು  ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ  ಗುರಿ ಉದ್ದೇಶ ಹಾಗೂ ಮುಂದಿನ ಪೀಳಿಗೆಗಾಗಿ  ಪರಿಸರ ಸಂರಕ್ಷಣೆಯ  ಮಹತ್ವದ ಕುರಿತು ತಿಳಿಸಿದರು.  ಮಾನನಿ ರಾಜ್ಯ ಒಕ್ಕೂಟ ಹಾಗೂ ಸ್ನೇಹ ಜ್ಯೋತಿ ತಾಲೂಕು ಒಕ್ಕೂಟ ಅಧ್ಯಕ್ಷೆ   ಮಂಜುಳಾ ಜಾನ್  ಶುಭ ಹಾರೈಸಿದರು. ಅರುಣೋದಯ ಮಹಾಸಂಘದ ಅಧ್ಯಕ್ಷೆ  ಏಲಿಯಾ ಸ್ವಾಗತಿಸಿದರು.ಡಿ.ಕೆ.ಆರ್‌.ಡಿ. ಎಸ್ ಸಂಸ್ಥೆಯ ಕಾರ್ಯಕರ್ತ ಮಾರ್ಕ್ ಡಿಸೋಜ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಠಾರದಲ್ಲಿ  ಗಿಡಗಳನ್ನು ನೆಡಲಾಯಿತು.

IMG-20240624-WA0000-1024x437 ಬಂಗಾಡಿ: ಡಿ.ಕೆ.ಆರ್.ಡಿ.ಎಸ್.(ರಿ) ವತಿಯಿಂದ  ವನಮಹೋತ್ಸವ  ಆಚರಣೆ : ಪರಿಸರ ಸಂರಕ್ಷಣೆ ಜಾಗೃತಿ

Post Comment

ಟ್ರೆಂಡಿಂಗ್‌