ಕೊಕ್ಕಡ :ಮನೆಗೆ ಬಂದ ನೆಂಟರ ಕಾರಿನಡಿ ಸಿಲುಕಿ 10 ವರ್ಷದ ಬಾಲಕ ಮೃತ್ಯು
ಪುತ್ತೂರು : ಕೊಕ್ಕಡದಲ್ಲಿ ಮನೆಯ ಅಂಗಳದಲ್ಲಿ ಕಾರೊಂದನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಬಾಲಕನೋರ್ವ ಕಾರಿನಡಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಅ.1ರಂದು ಕೊಕ್ಕಡದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕು ಕೊಕ್ಕಡ ನಿವಾಸಿ ಹಮೀದ್ ಎಂಬವರ ಪುತ್ರ , ಆತೂರಿನ ಶಾಲೆಯೊಂದರ 4ನೇ ತರಗತಿ ವಿದ್ಯಾರ್ಥಿ ನವಾಫ್(10)
ಮೃತಪಟ್ಟ ಬಾಲಕ.
ಹಮೀದ್ ಅವರ ಮನೆಗೆ ಬಂದಿದ್ದ ಸಂಬಂಧಿಕರು ಮನೆಯಂಗಳದಲ್ಲಿ ಕಾರನ್ನು ಹಿಂದಕ್ಕೆ ಚಲಾಯಿಸಿದಾಗ ಕಾರಿನ ಹಿಂಬದಿ ಸಿಟೌಟ್ ಕೆಳಗೆ ನಿಂತಿದ್ದ ನವಾಫ್ ಕಾರಿನಡಿಗೆ ಬಿದ್ದಿದ್ದು ಮೈಮೇಲೆ ಕಾರು ಹರಿದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೈಮೇಲೆ ಕಾರು ಹರಿದ ಪರಿಣಾಮ ಗಂಭೀರ ಗಾಯಗೊಂಡ ನವಾಫ್ ಮೃತಪಟ್ಟಿದ್ದಾರೆ. ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.
Post Comment