ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ : ಸಿಮೆಂಟ್ ಹೊತ್ತ ಲಾರಿ ಚರಂಡಿಗೆ

ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ : ಸಿಮೆಂಟ್ ಹೊತ್ತ ಲಾರಿ ಚರಂಡಿಗೆ

Share

ಬೆಳ್ತಂಗಡಿ : ಆಗಾಗ ಸುದ್ದಿಯಲ್ಲಿರುವ ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯ ಎಡವಟ್ಟು ಸಿಮೆಂಟ್ ಹೊತ್ತ ಈಚರ್ ಲಾರಿಯೊಂದು ಚರಂಡಿಗೆ ಸಿಲುಕಿ ಬಿದ್ದು ಮತ್ತೆ ನಾಗರಿಕರ ಟೀಕೆಗೆ ಗುರಿಯಾಗಿದೆ.
ಕುಂಟುತ್ತಾ ಸಾಗುವ ಕಾಮಗಾರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ
ಅ.08ರಂದು ಉಜಿರೆಯ ಎಂ.ಜಿ. ಟ್ರೇಡರ್ಸ್ ಬಳಿ ಸಿಮೆಂಟ್ ತುಂಬಿದ ಲಾರಿಯೊಂದು ಚರಂಡಿಗೆ ಬಿದ್ದ ಘಟನೆ ನಡೆದಿದೆ.

ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟಿಯ ಹೆದ್ದಾರಿ ಕಾಮಗಾರಿ ಆರಂಭವಾದಾಗಿನಿಂದ ದಿನನಿತ್ಯ ವಾಹನ ಸವಾರರು ನಾನಾ ನರಕಯಾತನೆ ಅನುಭವಿಸುತ್ತಿದ್ದಾರೆ. ಮುಂದಿನ ಸಂಪೂರ್ಣ ಕಾಮಗಾರಿ ಡಿ.ಪಿ. ಜೈನ್ ಗುತ್ತಿಗೆ ಬದಲಾಗಿ ‘ಬ್ಯಾಕ್ ಟು ಬ್ಯಾಕ್’ ಮಾದರಿಯಲ್ಲಿ ಮುಗ್ರೋಡಿ ಕನ್ಸ್ಟ್ರಕ್ಷನ್ ಹೆಗಲಿಗೆ ಬಂದರೂ ಕಾಮಗಾರಿಯ ಅಂಗವೈಕಲ್ಯ ವಾಸಿಯಾಗಲೇ ಇಲ್ಲ. ಕಾಮಗಾರಿ ಗುತ್ತಿಗೆ ಬದಲಾದರೂ ವಾಹನ ಸವಾರರ ನಿತ್ಯ ಗೋಳು ಕೇಳುವವರೇ ಇಲ್ಲ.
ಅವೈಜ್ಞಾನಿಕ ಅಥವಾ ಕಳಪೆ ಕಾಮಗಾರಿ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೆ ಸಾಕ್ಷಿ ಸಮೇತವಾಗಿ ಆ ಸತ್ಯ ಬಯಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ನಿರ್ಮಿಸಲಾಗಿದ್ದ ಚರಂಡಿಗೆ ಅಳವಡಿಸಿದ್ದ ಸ್ಲ್ಯಾಬ್ ತುಂಡಾಗಿ ಲಾರಿ ಚಕ್ರ ಅಲ್ಲೇ ಸಿಕ್ಕಿಹಾಕಿಕೊಂಡಿದೆ. ಪ್ರತೀ ನಿತ್ಯ ಪುಂಜಾಲಕಟ್ಟೆಯಿಂದ ಉಜಿರೆಗೆ ಸಂಚರಿಸುವ ವಾಹನ ಸವಾರರು ರಾಷ್ಟೀಯ ಹೆದ್ದಾರಿಯ ಕಾಮಗಾರಿಗೆ ಬೇಸತ್ತು, ಮೊದಲಿದ್ದ ರಸ್ತೆಯೇ ಚೆನ್ನಾಗಿತ್ತು, ರಾಷ್ಟೀಯ ಹೆದ್ದಾರಿ ಬೇಡವಾಗಿತ್ತು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕಾಮಗಾರಿಗೆ ಬಂದ ಅನುದಾನದಲ್ಲಿ ಕೋಟಿ, ಕೋಟಿ ಪರ್ಸಂಟೇಜ್ ಕೇಳಿದ್ದಾರೆ, ಬಿಡುಗಡೆಯಾದ ಅನುದಾನ ಹೆಚ್ಚಿದೆ, ಆದರೆ ಅಷ್ಟು ಕಾಮಗಾರಿ ನಡೆದೇ ಇಲ್ಲ ಎಂಬ ಆರೋಪಗಳೂ ಇದೆ. ಒಟ್ಟಿನಲ್ಲಿ ಕಾಮಗಾರಿ ಸರಿಯಾಗಿದೆಯೋ, ಇಲ್ಲವೋ, ಎಂಬುದನ್ನು ನೋಡೋರಿಲ್ಲಾ.. ಕೇಳೋರಿಲ್ಲ ಎಂಬತ್ತಾಗಿದ್ದು ಭವಿಷ್ಯದಲ್ಲಿ ಹೆದ್ದಾರಿಯ ಕಾಮಗಾರಿಯ ಗತಿ ಹೇಗಿರಬಹುದೆಂಬುದೇ ಇದೀಗ ಸಾರ್ವಜನಿಕ ವಲಯದಲ್ಲಿ ಉಳಿದಿರುವ ಪ್ರಶ್ನೆ.

ಒಟ್ಟಿನಲ್ಲಿ ಕಾಮಗಾರಿ ಸರಿಯಾಗಿದೆಯೋ, ಇಲ್ಲವೋ, ಎಂಬುದನ್ನು ನೋಡೋರಿಲ್ಲಾ.. ಕೇಳೋರಿಲ್ಲ ಎಂಬತ್ತಾಗಿದ್ದು ಭವಿಷ್ಯದಲ್ಲಿ ಹೆದ್ದಾರಿಯ ಕಾಮಗಾರಿಯ ಗತಿ ಹೇಗಿರಬಹುದೆಂಬುದೇ ಇದೀಗ ಸಾರ್ವಜನಿಕ ವಲಯದಲ್ಲಿ ಉಳಿದಿರುವ ಪ್ರಶ್ನೆ.

Post Comment

ಟ್ರೆಂಡಿಂಗ್‌