ಜೆಟ್ ಕಂಪೆನಿ ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢ ಸಾವು: ಬೆಳ್ತಂಗಡಿ ಮೂಲದ ಆಕಾಂಕ್ಷಾ ಕೊಲೆಯಾದಳೇ?

ಜೆಟ್ ಕಂಪೆನಿ ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢ ಸಾವು: ಬೆಳ್ತಂಗಡಿ ಮೂಲದ ಆಕಾಂಕ್ಷಾ ಕೊಲೆಯಾದಳೇ?

Share
IMG-20250518-WA0001 ಜೆಟ್ ಕಂಪೆನಿ ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ        ನಿಗೂಢ ಸಾವು:           ಬೆಳ್ತಂಗಡಿ ಮೂಲದ     ಆಕಾಂಕ್ಷಾ ಕೊಲೆಯಾದಳೇ?

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬೊಳಿಯಾರ್ ನಿವಾಸಿ, ಪ್ರಸ್ತುತ ಕಾಶಿಬೆಟ್ಟಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸಿವಿಲ್ ಗುತ್ತಿಗೆದಾರ ಸುರೇಂದ್ರ ಮತ್ತು ಜೆಡಿಎಸ್ ಮಾಜಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸಿಂಧೂದೇವಿ ದಂಪತಿ ಪುತ್ರಿ,ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ (22) ಅವರು ನಿಗೂಢವಾಗಿ ಸಾವನ್ನಪ್ಪಿದ ಘಟನೆ ಪಂಜಾಬ್ ನಲ್ಲಿ ಮೇ. 17 ರಂದು ನಡೆದಿದೆ.

ಪಂಜಾಬಿನ ಎಲ್ ಪಿಯು ಪಗ್ವಾಡ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, ಕಳೆದ ಆರು ತಿಂಗಳ ಹಿಂದೆ ಜೆಟ್ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗದಲ್ಲಿದ್ದರು.

ಮುಂದೆ ಜಪಾನ್ ಗೆ ಉದ್ಯೋಗಕ್ಕೆ ಹೋಗುವವರಿದ್ದು ಪಂಜಾಬ್ ಎಲ್ ಪಿಯು ಪಗ್ವಾಡ ಕಾಲೇಜಿನಿಂದ ಸರ್ಟಿಫಿಕೇಟ್ ಪಡೆಯಲು ತೆರಳಿದ್ದರು. ಮನೆಯವರಿಗೆ ಕರೆ ಮಾಡಿದ್ದ ಆಕಾಂಕ್ಷ, ನಾನು ಮಿತ್ರನೊಬ್ಬನ ಜೊತೆ ಕಾಲೇಜಿಗೆ ತೆರಳುತ್ತಿದ್ದೇನೆ. ಅವನೇ ನನ್ನನ್ನು ಬೈಕಿನಲ್ಲಿ ಬಿಟ್ಟು ಬಂದಿದ್ದಾರೆ ಎಂದು ತಿಳಿಸಿದ್ದಳು. ಕಾಲೇಜು ಸರ್ಟಿಫಿಕೇಟ್ ಪಡೆದ ಕೂಡಲೇ ಮನೆಯವರಲ್ಲಿಯೂ ಕಾಲ್ ನಲ್ಲಿ ಕೊನೆಯದಾಗಿ ಮಾತನಾಡಿದ್ದರೆಂದು ತಿಳಿದು ಬಂದಿದೆ. ಇದಾದ ಬಳಿಕ ಈಕೆ‌ ಕಾಲೇಜಿನ ಮೂರನೇ ಮಹಡಿಯಿಂದ ಕೆಳಬಿದ್ದು ನಿಗೂಢವಾಗಿ ಸಾವನ್ನು ಅಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಇವಿಷ್ಟು ಪ್ರಾಥಮಿಕ ಮಾಹಿತಿಯಾಗಿದೆ. ಈ ಬಗ್ಗೆ ಪಂಜಾಬ್ ನ ಜಲಂದರ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಟುಂಬದವರು ರಾತ್ರಿಯೇ ವಿಮಾನದ ಮೂಲಕ ಪಂಜಾಬ್ ಗೆ ಪ್ರಯಾಣ ಬೆಳೆಸಿದ್ದಾರೆ. ಹೆಚ್ಚಿನ ಮಾಹಿತಿಗಳು ಇಂದು ತಿಳಿದು ಬರಬೇಕಾಗಿದೆ.

IMG-20250518-WA0000 ಜೆಟ್ ಕಂಪೆನಿ ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ        ನಿಗೂಢ ಸಾವು:           ಬೆಳ್ತಂಗಡಿ ಮೂಲದ     ಆಕಾಂಕ್ಷಾ ಕೊಲೆಯಾದಳೇ?


ಆಕಾಂಕ್ಷ ಸಿಂಧೂ ದೇವಿ ಅವರ ಏಕೈಕ ಹೆಣ್ಣು ಮಗಳು. ದಂಪತಿಯ ಗಂಡು ಮಗನಿಗೆ ಕೆಲ ತಿಂಗಳುಗಳ ಹಿಂದಷ್ಟೇ ಕೇರಳದಲ್ಲಿ ಅದ್ದೂರಿ ವಿವಾಹವಾಗಿ, ಮಂಗಳೂರಿನಲ್ಲಿ ಔತಣಕೂಟ ಕೂಡ ಆಗಿತ್ತು.

IMG-20250413-WA0003-12-682x1024 ಜೆಟ್ ಕಂಪೆನಿ ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ        ನಿಗೂಢ ಸಾವು:           ಬೆಳ್ತಂಗಡಿ ಮೂಲದ     ಆಕಾಂಕ್ಷಾ ಕೊಲೆಯಾದಳೇ?
IMG-20250413-WA0001-13-792x1024 ಜೆಟ್ ಕಂಪೆನಿ ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ        ನಿಗೂಢ ಸಾವು:           ಬೆಳ್ತಂಗಡಿ ಮೂಲದ     ಆಕಾಂಕ್ಷಾ ಕೊಲೆಯಾದಳೇ?
IMG-20250413-WA0002-12-792x1024 ಜೆಟ್ ಕಂಪೆನಿ ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ        ನಿಗೂಢ ಸಾವು:           ಬೆಳ್ತಂಗಡಿ ಮೂಲದ     ಆಕಾಂಕ್ಷಾ ಕೊಲೆಯಾದಳೇ?
Previous post

ಬಂದಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಆರತಕ್ಷತೆ ಊಟದ ಬಳಿಕ ಅಸ್ವಸ್ಥರಾದ ಪ್ರಕರಣ: ಡಿಹೆಚ್ಒ, ಟಿಹೆಚ್ಒ ಮತ್ತಿತರ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ; ಮಾಹಿತಿ ಸಂಗ್ರಹ

Next post

ಬೆಳ್ತಂಗಡಿಯಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನದ ಪ್ರಯುಕ್ತ ಡೆಂಗ್ಯೂ ಜಾಗೃತಿ ಜಾಥಾ

Post Comment

ಟ್ರೆಂಡಿಂಗ್‌

error: Content is protected !!