ಮಾಲಾಡಿಯಲ್ಲಿ ಬುದ್ದ, ಬಸವ, ಅಂಬೇಡ್ಕರ್ ಜನ್ಮ‌ದಿನಾಚರಣೆ

ಮಾಲಾಡಿಯಲ್ಲಿ ಬುದ್ದ, ಬಸವ, ಅಂಬೇಡ್ಕರ್ ಜನ್ಮ‌ದಿನಾಚರಣೆ

Share
Buddha-Basaveshwara-and-Ambedkar-1024x576 ಮಾಲಾಡಿಯಲ್ಲಿ ಬುದ್ದ, ಬಸವ, ಅಂಬೇಡ್ಕರ್ ಜನ್ಮ‌ದಿನಾಚರಣೆ

ಬೆಳ್ತಂಗಡಿ : ಭಾರತರತ್ನ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಜನ್ಮ‌ದಿನಾಚರಣಾ ಸಮಿತಿ ಮಾಲಾಡಿ  ಇದರ ಆಶ್ರಯದಲ್ಲಿ  ಬುದ್ದ, ಬಸವ, ಮತ್ತು ಅಂಬೇಡ್ಕರ್ ಜನ್ಮ‌ದಿನಾಚರಣೆಯು ಮಾಲಾಡಿ ಅಂಬೇಡ್ಕರ್ ಭವನದಲ್ಲಿ ಜರಗಿತು.

ಬೆಳಿಗ್ಗೆ ಜನ್ಮದಿನಾಚರಣೆ ಸಮಿತಿಯ ಅಧ್ಯಕ್ಷರಾದ ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಸೇಕ್ರೇಡ್ ಹಾಟ್೯ ಕಾಲೇಜಿನ ಪ್ರಾಂಶುಪಾಲ ಪ್ರೋ ಅಲೆಕ್ಸ್ ಐವನ್ ಸಿಕ್ವೇರಾ ಸಂವಿಧಾನದ ಪೀಠಿಕೆ ಓದುವ ಮೂಲಕ  ಉದ್ಘಾಟಿಸಿ ಶುಭಹಾರೈಸಿದರು.‌

ಸಮಾರಂಭದ ವೇದಿಕೆಯಲ್ಲಿ ಡಾ. ನಿಯಾಜ್ ಪಣಕಜೆ,  ಶ್ರೀ ರಾಮ್ ಫೈನಾನ್ಸ್ ನ‌‌ ಮಾಜಿ ಕಾರ್ಯಕಾರಿ‌ ನಿರ್ದೇಶಕ ನಿತ್ಯಾನಂದ ಹೆಗ್ಡೆ, ಬೆಳ್ತಂಗಡಿ ಭೂನ್ಯಾಯ ಮಂಡಳಿಯ ಸದಸ್ಯ ಬಾಬು‌ ಎರ್ಮೆತ್ತೋಡಿ, ಮಾಲಾಡಿ‌ ಗ್ರಾಮ‌ ಪಂಚಾಯತ್ ನ‌‌‌ ಮಾಜಿ ಸದಸ್ಯ ಗುರುಪ್ರಸಾದ್, ಸಾವಿತ್ರಿ ಬಾ ಪುಲೆ ತಂಡದ ಅಧ್ಯಕ್ಷೆ ಗುಲಾಬಿ‌ ಉಪಸ್ಥಿತರಿದ್ದು ಶುಭಹಾರೈಸಿದರು.ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪದವಿ ಪಡೆದ ರುಕ್ಮಯ ಅವರನ್ನು‌ ಸನ್ಮಾನಿಸಲಾಯಿತು.‌ ಸುಶ್ಮೀತಾ ಸ್ವಾಗತಿಸಿ, ಗೌತಮಿ ವಂದಿಸಿದರು. ಸುನೀತಾ ಕಾರ್ಯಕ್ರಮ ನಿರೂಪಿಸಿದರು.‌ ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ಮುಂದುವರಿಯಿತು.

ಸಂಜೆ ‌ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಂಬೇಡ್ಕರ್ ಯುವಕ‌ ಸಂಘ(ರಿ) ಕಕ್ಯೆಪದವು ಇದರ ಅಧ್ಯಕ್ಷ ರಾಜೀವ್ ಕಕ್ಯೆಪದವು, ಮಾಲಾಡಿ ಗ್ರಾಮ‌ ಪಂಚಾಯತ್ ನ ಅಧ್ಯಕ್ಷ ಪುನೀತ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ರಮೇಶ್ ಆರ್,  ಧರ್ಮಸ್ಥಳ ಗ್ರಾಮ‌ ಪಂಚಾಯತ್ ನ ಸದಸ್ಯೆ ಸುನೀತಾ, ಪತ್ರಕರ್ತೆ ಕು.ಯೋಗಿನಿ‌ ಮಚ್ಚಿನ ಭಾಗವಹಿಸಿ ಶುಭಹಾರೈಸಿದರು.‌  ವಿವಿಧ  ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ‌ಬಾಬಿ‌ ಮಾಲಾಡಿ ಸ್ವಾಗತಿಸಿ, ಕ್ರಷ್ಣ ಪ್ರಾಸ್ತಾವನೆಗೈದರು. ಸುಕೇಶ್ ಕೆ ಮಾಲಾಡಿ ಕಾರ್ಯಕ್ರಮ ನಿರೂಪಿಸಿ, ಲೋಕೇಶ್ ವಂದಿಸಿದರು.

IMG-20240529-WA0029-1-1024x768 ಮಾಲಾಡಿಯಲ್ಲಿ ಬುದ್ದ, ಬಸವ, ಅಂಬೇಡ್ಕರ್ ಜನ್ಮ‌ದಿನಾಚರಣೆ
IMG-20240529-WA0030-1024x768 ಮಾಲಾಡಿಯಲ್ಲಿ ಬುದ್ದ, ಬಸವ, ಅಂಬೇಡ್ಕರ್ ಜನ್ಮ‌ದಿನಾಚರಣೆ
Previous post

ಶಾಸಕ ಹರೀಶ್ ಪೂಂಜ ವಿರುದ್ಧದ ಸರಣಿ ಪ್ರಕರಣ: ಎರಡು ಕೇಸುಗಳ ಬಗ್ಗೆ  ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

Next post

ಪುಸ್ತಕ ಪರಿಚಯ:ಶಾಲಾ ಗ್ರಂಥಾಲಯಗಳಲ್ಲಿ ಇರಲೇಬೇಕಾದ ಪುಸ್ತಕ ‘ಮಕ್ಕಳಿಗಾಗಿ ಸಂವಿಧಾನ’

Post Comment

ಟ್ರೆಂಡಿಂಗ್‌