ಪುಂಜಾಲಕಟ್ಟೆಯಲ್ಲಿ ‘ಪ್ರಧಾನಮಂತ್ರಿ ಜನೌಷಧಿಕೇಂದ್ರ’ ಶುಭಾರಂಭ

ಪುಂಜಾಲಕಟ್ಟೆಯಲ್ಲಿ ‘ಪ್ರಧಾನಮಂತ್ರಿ ಜನೌಷಧಿಕೇಂದ್ರ’ ಶುಭಾರಂಭ

Share
IMG-20241213-WA0003 ಪುಂಜಾಲಕಟ್ಟೆಯಲ್ಲಿ 'ಪ್ರಧಾನಮಂತ್ರಿ ಜನೌಷಧಿಕೇಂದ್ರ' ಶುಭಾರಂಭ

ಪುಂಜಾಲಕಟ್ಟೆ : ಭಾರತೀಯ ಪ್ರಧಾನಮಂತ್ರಿ ಜನೌಷಧಿಯ ನೂತನ ಕೇಂದ್ರವು ಪುಂಜಾಲಕಟ್ಟೆಯಲ್ಲಿ ಭಾನುವಾರ ಶುಭಾರಂಭಗೊಂಡಿತು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ನೂತನ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿಪ ಮಾತನಾಡಿ ಪ್ರಧಾನಮಂತ್ರಿಗಳ ಕನಸಿನ ಯೋಜನೆ ನಮ್ಮ ಊರಿನಲ್ಲೂ ಸಾಕಾರಗೊಂಡಿದೆ, ಅತ್ಯುತ್ತಮ ಗುಣಮಟ್ಟದ ಔಷಧಿಗಳು ಕಡಿಮೆ ದರದಲ್ಲಿ ದೊರೆಯುತ್ತಿದ್ದು, ಜನರು ಇದರ ಪ್ರಯೋಜನವನ್ನು ಹೆಚ್ಚಾಗಿ ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಸ್ಥಳೀಯ ಪ್ರಮುಖರಾದ ಜನಾರ್ದನ ಪೂಜಾರಿ, ದಿನೇಶ ಪಾಂಗಾಳ,
ಧನವತಿ ಹಾಗೂ ಕೇಂದ್ರದ ಸಿಬ್ಬಂದಿಗಳು ದೀಪ ಪ್ರಜ್ವಲಿಸಿ ಕೈಜೋಡಿಸಿದರು.
ಯುವ ನ್ಯಾಯವಾದಿ ತಾಜುದ್ದಿನ್ ಅವರು ಕೇಂದ್ರದಲ್ಲಿರುವ ಉಚಿತ
ಇ. ಸಿ. ಜಿ. ಸೌಲಭ್ಯವನ್ನು ಉದ್ಘಾಟಿಸಿದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ರಾಜಕೇಸರಿ ಸಂಘಟನೆಯ ದೀಪಕ್ ಜಿ. ಹಾಗೂ ರವಿ ನಾಯ್ಕ್, ಪುರುಷೋತ್ತಮ್ ವಾಮದಪದವು ,
ಬಂಟ್ವಾಳ ಕುಲಾಲ ಯುವ ವೇದಿಕೆಯ ಅಧ್ಯಕ್ಷ ನಿತೀಶ್ ಕುಲಾಲ್ ಪಲ್ಲಿಕಂಡ, ಸಿದ್ದಕಟ್ಟೆ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಮಯ್ಯ ಬೊಟ್ಟುಮನೆ, ಪುತ್ತೂರು ಕುಂಬಾರ ಗುಡಿ ಕೈಗಾರಿಕಾ ಬ್ಯಾಂಕ್ ಮಡಂತ್ಯಾರು ಶಾಖೆಯ ವ್ಯವಸ್ಥಾಪಕ ರಕ್ಷಿತ್ ಕಲಾಕುಂಜ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಜನಔಷಧಿ ಕೇಂದ್ರದ ಮಾಲಕರಾದ ಮನೋಜ್ ಕುಲಾಲ್ ಬಸಬೈಲು ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿ ವಂದಿಸಿದರು.

IMG-20241213-WA0002-1-575x1024 ಪುಂಜಾಲಕಟ್ಟೆಯಲ್ಲಿ 'ಪ್ರಧಾನಮಂತ್ರಿ ಜನೌಷಧಿಕೇಂದ್ರ' ಶುಭಾರಂಭ

Post Comment

ಟ್ರೆಂಡಿಂಗ್‌

error: Content is protected !!