ತೆಕ್ಕಾರು ದ್ವೇಷ ಭಾಷಣ ಪ್ರಕರಣ: ಹರೀಶ್ ಪೂಂಜಾ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ ಪೊಲೀಸರು

ತೆಕ್ಕಾರು ದ್ವೇಷ ಭಾಷಣ ಪ್ರಕರಣ: ಹರೀಶ್ ಪೂಂಜಾ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ ಪೊಲೀಸರು

Share
IMG-20250520-WA0002 ತೆಕ್ಕಾರು ದ್ವೇಷ ಭಾಷಣ ಪ್ರಕರಣ:  ಹರೀಶ್ ಪೂಂಜಾ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ  ಪೊಲೀಸರು

ಬೆಳ್ತಂಗಡಿ : ತೆಕ್ಕಾರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಮುಸ್ಲೀಮ್ ಸಮುದಾಯದ ನಿಂದನೆ ಮತ್ತು ದ್ವೇಷ ಭಾಷಣ ಮಾಡಿದ ಆರೋಪದಲ್ಲಿ
‌ಶಾಸಕ ಹರೀಶ್ ಪೂಂಜ ಅವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಉಪ್ಪಿನಂಗಡಿ ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.


ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಮುಸ್ಲೀಮ್ ಸಮುದಾಯದ ನಿಂದನೆ ಮತ್ತು ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಶಾಸಕ ಹರೀಶ್ ಪೂಂಜ ಅವರ ವಿರುದ್ದ ಎಫ್ ಐ ಆರ್ ದಾಖಲಿಸಿಕೊಂಡ ಬೆನ್ನಲ್ಲೇ ಎಫ್ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಈ ಬಗ್ಗೆ ತಕ್ಷಣಕ್ಕೆ ಯಾವುದೇ ಕ್ರಮಕೈಗೊಳ್ಳದ ಹೈಕೋರ್ಟ್ ದೂರುದಾರರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು. ಈ ಮಧ್ಯೆ ಪೊಲೀಸರು ಶಾಸಕ ಹರೀಶ್ ಪೂಂಜ ವಿರುದ್ದ ಹೈಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದು ಎಫ್ ಐ ಆರ್ ರದ್ದುಗೊಳಿಸಲು ಕೋರ್ಟ್ ಗೆ ಮೊರೆ ಹೋಗಿದ್ದ ಶಾಸಕ ಹರೀಶ್ ಪೂಂಜ ಅವರಿಗೆ ಮತ್ತೊಂದು ಕಾನೂನಾತ್ಮಕ ಸವಾಲು ಎದುರಾದಂತಾಗಿದೆ.
ಇಂದು ಮಂಗಳವಾರ (ಮೇ 20) ಪ್ರಕರಣ ಸಂಬಂಧ ವಾದ – ಪ್ರತಿವಾದ ನಡೆದಿದ್ದು ನ್ಯಾಯಾಲಯವು ಯಾವುದೇ ತೀರ್ಪು ನೀಡದೆ ವಾದ-ವಿವಾದವನ್ನು ಎರಡು ದಿನ ಮುಂದೂಡಿದೆ. ದೂರುದಾರ ಎಸ್ ಬಿ. ಇಬ್ರಾಹಿಂ ಅವರ ಪರವಾಗಿ ಹೈಕೊರ್ಟಿನ ಹಿರಿಯ ನ್ಯಾಯವಾದಿ ಬಾಲನ್ ಅವರು ವಾದಿಸುತ್ತಿದ್ದಾರೆ.

IMG-20250413-WA0003-15-682x1024 ತೆಕ್ಕಾರು ದ್ವೇಷ ಭಾಷಣ ಪ್ರಕರಣ:  ಹರೀಶ್ ಪೂಂಜಾ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ  ಪೊಲೀಸರು
IMG-20250413-WA0002-16-792x1024 ತೆಕ್ಕಾರು ದ್ವೇಷ ಭಾಷಣ ಪ್ರಕರಣ:  ಹರೀಶ್ ಪೂಂಜಾ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ  ಪೊಲೀಸರು
IMG-20250413-WA0001-16-792x1024 ತೆಕ್ಕಾರು ದ್ವೇಷ ಭಾಷಣ ಪ್ರಕರಣ:  ಹರೀಶ್ ಪೂಂಜಾ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ  ಪೊಲೀಸರು

Post Comment

ಟ್ರೆಂಡಿಂಗ್‌