ಕಳೆಂಜ ಜನಸ್ಪಂದನ ಸಭೆ: ಅಂಬೇಡ್ಕರ್ ಭವನಕ್ಕೆ ಜಾಗ ಮೀಸಲಿಡಲು ಶಾಸಕರಿಂದ ಸೂಚನೆ

ಕಳೆಂಜ ಜನಸ್ಪಂದನ ಸಭೆ: ಅಂಬೇಡ್ಕರ್ ಭವನಕ್ಕೆ ಜಾಗ ಮೀಸಲಿಡಲು ಶಾಸಕರಿಂದ ಸೂಚನೆ

Share
InShot_20250722_123404394-1-1024x1024 ಕಳೆಂಜ ಜನಸ್ಪಂದನ ಸಭೆ: ಅಂಬೇಡ್ಕರ್ ಭವನಕ್ಕೆ ಜಾಗ ಮೀಸಲಿಡಲು ಶಾಸಕರಿಂದ ಸೂಚನೆ

ಬೆಳ್ತಂಗಡಿ : ಗ್ರಾಮಸ್ಥರಿಗೆ ಯಾವುದೇ ಸರಕಾರಿ ಸಭೆ, ಸಮಾರಂಭಗಳನ್ನು ಆಯೋಜಿಸಲು ಸೂಕ್ತ ಸಭಾಭವನ ವ್ಯವಸ್ಥೆ ಇಲ್ಲದ ಕಾರಣ ಈ ಬಗ್ಗೆ ಅಂಬೇಡ್ಕರ್ ಭವನ ಅಥವಾ ಯಾವುದೇ ರೀತಿಯ ಕಟ್ಟಡವನ್ನು ನಿರ್ಮಿಸುವ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ತೇಜಕುಮಾರ್ ಎಂಬವರು ಒತ್ತಾಯಿಸಿದರು.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಳೆಂಜ ಗ್ರಾಮಪಂಚಾಯತ್ ವ್ಯಾಪ್ತಿಯ ಜನಸ್ಪಂದನಾ ಸಭೆಯು ಶಾಸಕ ಹರೀಶ್ ಪೂಂಜ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಸಭಾಭವನ ಬೇಕು ಎಂದು ಗ್ರಾಮಸ್ಥರಾದ ತೇಜಕುಮಾರ್ ಅವರ ಮೌಖಿಕ ಮನವಿ ಸಲ್ಲಿಸಿದಾಗ ಸ್ಪಂದಿಸಿದ ಶಾಸಕ ಹರೀಶ್ ಪೂಂಜ ಅವರು ಕಂದಾಯ ಇಲಾಖಾ ಗ್ರಾಮಾಡಳಿತ ಅಧಿಕಾರಿಯನ್ನು ವಿಚಾರಿಸಿದ್ದು 10 ಸೆಂಟ್ಸ್ ಜಾಗ ಕಾದಿರಿಸಿದ ಬಗ್ಗೆ ಮಾಹಿತಿ ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಹರೀಶ್ ಪೂಂಜ 10.ಸೆಂಟ್ಸ್ ಜಾಗ ಸಾಕಾಗುವುದಿಲ್ಲ; ಅರ್ಧ ಎಕ್ರೆ ಜಾಗವನ್ನು ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಕಾದಿರಿಸುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.
ಈ ಸಂದರ್ಭ ಕಾಯರ್ತಡ್ಕ ರಸ್ತೆ ತೀವ್ರ ಹದಗೆಟ್ಟಿದ್ದು ಇದರ ದುರಸ್ತಿ ಬಗ್ಗೆ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರೊಬ್ಬರು ಮನವಿ ಮಾಡಿಕೊಂಡರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 8 ಕೋಟಿ ರೂ. ಅನುದಾನದಲ್ಲಿ 4 ಕೋಟಿ ರೂಪಾಯಿ ಹಣವನ್ನು ಕಾಯರ್ತಡ್ಕ ರಸ್ತೆಯ ಅಭಿವೃದ್ಧಿಗಾಗಿ ಇಡಲಾಗಿದೆ. ರಾಜಕಮಲ್ ನವರಿಗೆ ಕಾಮಗಾರಿಗೆ ಟೆಂಡರ್ ಕೂಡ ಆಗಿದೆ, ಕಾಮಗಾರಿ ಪ್ರಾರಂಭವಾಗುತ್ತಿದೆ ಎಂದು ಮಾಹಿತಿ ನೀಡಿದರು.
ಗ್ರಾಮಸ್ಥ ಪದ್ಮನಾಭ ಎಂಬವರು ಸ್ಥಳೀಯ ಸರಕಾರಿ ಶಾಲೆಯ ಮೇಲ್ಛಾವಣಿ ಶಿಥಿಲಗೊಂಡಿದೆ, ಮಳೆಗಾಲದಲ್ಲಿ ಶಾಲಾ ಮಕ್ಕಳ ಶಾಲೆಗೆ ಕಳಿಸುವ ಬಗ್ಗೆ ಆತಂಕವಾಗುತ್ತಿದೆ ಮತ್ತು ಶಾಲೆಯ ಜಾಗಕ್ಕೆ ಪಹಣಿ ಸಮಸ್ಯೆಯೂ ಇದೆ ಎಂದರು.
ಈ ಬಗ್ಗೆ ಗ್ರಾಮಪಂಚಾಯತ್ ಆಡಳಿತ ವತಿಯಿಂದ ಕೂಡಲೇ ದುರಸ್ತಿಗೊಳಿಸಲು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕ ಹರೀಶ್ ಸೂಚಿಸಿದರು.
ಕಾಡಾನೆ, ಕಾಡು ಹಂದಿ, ಮಂಗಗಳ ಹಾವಳಿಯಿಂದ ನಷ್ಟ, ತೊಂದರೆ ಅನುಭವಿಸಿದವರು ತಮ್ಮ ಅಳಲು ತೋಡಿಕೊಂಡರು.
ಕಳೆದ ವರ್ಷ ಕಳೆಂಜ ಗ್ರಾಮದ ಅರಣ್ಯದಂಚಿನ 8 ಸಾವಿರ ಎಕ್ರೆ ವಿಸ್ತೀರ್ಣದ 309 ಸ.ನಂ. ದಲ್ಲಿ ಉಂಟಾದ ವಿವಾದ ಹಾಗೂ
ಲೋಲಾಕ್ಷ ಎಂಬವರ ಮನೆ ನಿರ್ಮಾಣದ ಸಂದರ್ಭ ಉಂಟಾದ ಖಾಸಗಿ-ಅರಣ್ಯ ಇಲಾಖೆಯ ಮಧ್ಯೆ ಉಂಟಾದ ಸಮಸ್ಯೆ,ವಿವಾದ,
ಜಂಟಿ ಸರ್ವೆ ಗೊಂದಲ ಮತ್ತಿತರ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿದ ಗ್ರಾಮಸ್ಥರು ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ಶಾಸಕರು ಸರಕಾರ ಮತ್ತು ಇಲಾಖಾ ಮಟ್ಟದಲ್ಲಿ ನಡೆದ ಹಂತ ಹಂತದ ಬೆಳವಣಿಗೆಗಳನ್ನು ವಿವರಿಸುವ ಮೂಲಕ ಸುದೀರ್ಘ ಮಾಹಿತಿ ನೀಡಿದರು.
ಉಳಿದಂತೆ ಜನಸ್ಪಂದನ ಸಭೆಯಲ್ಲಿ ಅಕ್ರಮ -ಸಕ್ರಮ, ಪ್ಲಾಟಿಂಗ್ ಸಮಸ್ಯೆ, ಪಶುಸಂಗೋಪಣಾ ಇಲಾಖಾ ಸಿಬ್ಬಂದಿಗಳ ಕೊರತೆ ಮುಂತಾದ ವಿಚಾರಗಳು ಸಭೆಯಲ್ಲಿ ಕೇಳಿ ಬಂದವು.

Post Comment

ಟ್ರೆಂಡಿಂಗ್‌

error: Content is protected !!