ಅಕ್ರಮವಾಗಿ ಕಡಿದು ದಾಸ್ತಾನಿರಿಸಿದ್ದ 7,02,276ರೂ. ಮೌಲ್ಯದ ಮರಮಟ್ಟು ವಶಕ್ಕೆ
ಬೆಳ್ತಂಗಡಿ : ನೆರಿಯಾ ಗ್ರಾಮದ ಅಂಬಟೆ ಮಲೆ ಎಂಬಲ್ಲಿ ಖಾಸಗಿ ಎಸ್ಟೇಟ್ ಒಂದರಲ್ಲಿ ಅಕ್ರಮವಾಗಿ ಕಡಿದು ಸಂಗ್ರಹಿಸಿಡಲಾಗಿದ್ದ ಮರ ಮತ್ತು ಕಟ್ಟಿಗೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಮರದ ಪೈಕಿ ಕಾಯಿದೂಪ -18.386 ಘನ ಮೀಟರ್ ಹಲಸು-1.353ಘ.ಮೀ., ಹೆಬ್ಬಲಸು 20.277ಘ.ಮೀ., ಚೇರೆ-0.836ಘ.ಮೀ., ಕಾಡು ಜಾತಿ 1.235, ಸಹಿತ ಒಟ್ಟು 42.114 ಘನ ಮೀಟರ್ ಮರ ಹಾಗೂ 15,000 ಘನ ಮೀಟರ್ ಕಟ್ಟಿಗೆ ಸೇರಿದೆ. ವಶಪಡಿಸಿಕೊಂಡ ಅಕ್ರಮ ಮರದ ಒಟ್ಟು ಮೌಲ್ಯ 7,02,276ರೂ. ಎಂದು ಅಂದಾಜಿಸಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿ ಪಾರೆಂಕಿ ಗ್ರಾಮದ ಕೊಲ್ಪೆದಬೈಲು ನಜೀರ್, ಚಿಬಿದ್ರೆ ಗ್ರಾಮದ ಮೊಹಮ್ಮದ್ ರಫೀಕ್, ಮಂಗಳೂರು ಬಂದರ್ ನ ಭರತ್ ಕುಮಾರ್ ಕೊಠಾರಿ ಹಾಗೂ ಎಸ್ಟೇಟ್ ಮ್ಯಾನೇಜರ್ ಗಂಡಿಬಾಗಿಲಿನ ವಿನು ಎಂಬವರನ್ನು ವಶಕ್ಕೆ ಪಡೆದು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.ಎಸಿಎಫ್ ಶ್ರೀಧರ್ ಪಿ., ಬೆಳ್ತಂಗಡಿ ಆರ್ ಎಫ್ ಒ ಮೋಹನ್ ಕುಮಾರ್ ಬಿ.ಜಿ.,ಡಿ ಆರ್ ಎಫ್ ಒ ಯತೀಂದ್ರ ಮತು ಸಂತೋಷ್ ಕಾರ್ಯಾಚರಣೆಯಲ್ಲಿ ಭಾಗಿಯಾದರು.
Post Comment