ಮೂವರು ಶಾಸಕರನ್ನು ಕೊಟ್ಟ ಕೇದೆ ಗುತ್ತಿನಲ್ಲಿ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್
![IMG-20240327-WA0103-1-1024x683 ಮೂವರು ಶಾಸಕರನ್ನು ಕೊಟ್ಟ ಕೇದೆ ಗುತ್ತಿನಲ್ಲಿ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್](https://newscounter.in/wp-content/uploads/2024/03/IMG-20240327-WA0103-1-1024x683.jpg)
ಬೆಳ್ತಂಗಡಿ : ತಾಲೂಕಿನ ರಾಜಕೀಯ ಇತಿಹಾಸವು ಕಾಲ ಕಾಲಕ್ಕೆ ಮಹತ್ವದ ಅಷ್ಟೇ ಚಾರಿತ್ರಿಕ ತಿರುವುಗಳನ್ನು ಪಡೆದುಕೊಳ್ಳಲು ಕಾರಣವಾದ ಪ್ರತಿಷ್ಠಿತ ಕೇದೆ ಗುತ್ತು ಮನೆಗೆ ಈ ಭಾರಿಯ ದ.ಕ. ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಭೇಟಿ ನೀಡಿ ಮನೆತನಕ್ಕೆ ಗೌರವ ಸಲ್ಲಿಸಿದರು.
ಕುವೆಟ್ಟು ಗ್ರಾಮದ ಪ್ರತಿಷ್ಠೆ ಕೇದೆ ಗುತ್ತಿನ ಮನೆಯ ಯಜಮಾನ ಚಂದ್ರಹಾಸ ಕೇದೆ ಅವರು ಪದ್ಮರಾಜ್ ಆರ್. ಅವರ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಾಜಿ ಶಾಸಕತ್ರಯರಾದ ಕೇದೆ ಚಿದಾನಂದ ಬಂಗೇರ, ಕೇದೆ ವಸಂತ ಬಂಗೇರ, ಕೇದೆ ಪ್ರಭಾಕರ ಬಂಗೇರ ಅವರ ತಂದೆ ದಿ.ಕೇದೆ ಸುಬ್ಬಪ್ಪ ಪೂಜಾರಿ. ದಿ. ಕೇದೆ ಸುಬ್ಬ ಪೂಜಾರಿ ಅವರ ಮನೆಯೇ ಪ್ರತಿಷ್ಠಿತ ಕೇದೆ ಗುತ್ತು .
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಕ್ಕೆ ಮೂವರು ಶಾಸಕರನ್ನು (ಮಾಜಿ ಶಾಸಕರಾದ ಕೆ. ಚಿದಾನಂದ ಬಂಗೇರ, ಕೆ. ವಸಂತ ಬಂಗೇರ, ಕೆ. ಪ್ರಭಾಕರ ಬಂಗೇರ) ಸೇರಿದಂತೆ ಹಲವು ಗಣ್ಯರನ್ನು ನಾಡಿಗೆ ನೀಡಿದ ಬಿಲ್ಲವ ಸಮುದಾಯದ ಪ್ರತಿಷ್ಠಿತ ಗುತ್ತಿನ ಮನೆತನ ಇದಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಕೇದೆ ಗುತ್ತಿನ ಮನೆಗೆ ಭೇಟಿ ನೀಡಿದ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬ್ಲಾಕ್ ನಗರ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಾಶಿಪಟ್ಟ, ಗ್ರಾಮೀಣ ಅಧ್ಯಕ್ಷ ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಂದನಾ ಭಂಡಾರಿ, ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕೊಕ್ಕಡ, ಬೆಳ್ತಂಗಡಿ ಚುನಾವಣಾ ಉಸ್ತುವಾರಿಗಳಾದ ಧರ್ಣೇಂದ್ರ ಕುಮಾರ್, ರಜತ್ ಗೌಡ, ಸುಭಾಶ್ ರೈ, ಮಾಲಾಡಿ ಗ್ರಾಪಂ ಅಧ್ಯಕ್ಷ ಪುನೀತ್ ಕುಮಾರ್ ಮಾಲಾಡಿ, ವೇಣೂರು ಸೂರ್ಯ ಚಂದ್ರ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್. ಕೋಟ್ಯಾನ್, ಶೇಖರ್ ಕುಕ್ಯಾಡಿ, ಮನೋಹರ್ ಇಳಂತಿಲ, ಪದ್ಮನಾಭ ಸಾಲ್ಯಾನ್ ಮಾಲಾಡಿ ಸೇರಿದಂತೆ ನಾಯಕರು ಕಾರ್ಯಕರ್ತರು ಪಾಲ್ಗೊಂಡರು.
Post Comment