ಜಗತ್ತಿನಲ್ಲಿ ಅತ್ಯಂತ ಮರ್ಯಾದೆ ಕೆಟ್ಟವರಂದ್ರೆ ನೀಲಿ ಶಾಲಿನವರಂತೆ..!ಸೌಜನ್ಯಪರ ಹೋರಾಟಗಾರರ ಟೀಕಿಸಲು ಫೇಸ್ಬುಕ್ ನಲ್ಲಿ ದಲಿತರ ಅವಹೇಳನ, ದ್ವೇಷ ಬಿತ್ತುವ ವಿಕೃತ ಬರಹ ; ಬೆಳ್ತಂಗಡಿಯಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದೂರು

ಬೆಳ್ತಂಗಡಿ : ಪ್ರವೀಣ್ ಮದ್ದಡ್ಕ ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಸೌಜನ್ಯಪರ ಹೋರಾಟಗಾರರ ವಿರುದ್ಧ ತೀವ್ರ ಅವಹೇಳಕಾರಿ ಪೋಸ್ಟ್ ಒಂದನ್ನು ಹಾಕಲಾಗಿದ್ದು ಈ ಬರಹ ಇದೀಗ ವೈರಲ್ ಆಗುತ್ತಿದೆ. ಸೌಜನ್ಯಪರ ಹೋರಾಟಗಾರರನ್ನು ನಿರಂತರವಾಗಿ ನಿಂದಿಸುವ ವಿಲಕ್ಷಣ ಮನಸ್ಥಿತಿ ಹೊಂದಿರುವ ವ್ಯಕ್ತಿಯೋರ್ವ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಖಾತೆಯಲ್ಲಿ ದಲಿತರ ಬಗ್ಗೆ ಅವಾಚ್ಯವಾಗಿ ನಿಂದಿಸಿದ ಬರಹವೊಂದು ವೈರಲ್ ಆಗುತ್ತಿದ್ದಂತೆ ಚರ್ಚೆಗೆ ಕಾರಣವಾಗಿದೆ. ಈ ದ್ವೇಷ ಪೂರಿತ ನಿಂದನಾತ್ಮಕ ಬರಹದಿಂದ ಆಕ್ರೋಶಗೊಂಡ ದಲಿತ ಸಂಘಟನೆಗಳು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು ಸಂಘಟನೆಯ ನಾಯಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರವೀಣ್ ಮದ್ದಡ್ಕ ಎಂಬ ಹೆಸರಿನ ಫೇಸ್ಬುಕ್ ಖಾತೆಯಿಂದ ಹಾಕಲಾದ ಬರಹದಲ್ಲಿ ‘ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮರ್ಯಾದಿ ಕೆಟ್ಟ ನಿಯತ್ತು ಇಲ್ಲದ ಜನ ದಲಿತರು, ನೀಲಿ ಶಾಲ್ ಹಾಕಿದ ಜನಗಳಿಗೆ ಬಿಟ್ಟಿ ಎಣ್ಣೆ ಸಿಕ್ಕರೆ ತಾಯಿಯನ್ನೇ ಮಾರುತ್ತಾರೆ’ ಎಂದು ಬರೆಯಲಾಗಿದ್ದು ಈ ಬರಹ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಸುದ್ದಿಯಲ್ಲಿರುವ ಧರ್ಮಸ್ಥಳದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಪ್ರಕರಣದ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟ, ಹಾಗೂ ಹೋರಾಟಗಾರರ ವಿರುದ್ಧ ಫೇಸ್ಬುಕ್ ನಲ್ಲಿ ಬರೆಯುವ ಭರದಲ್ಲಿ ದಲಿತರನ್ನು ಹಿಯಾಳಿಸಿ ಅವಾಚ್ಯವಾಗಿ ನಿಂದನೆ ನಡೆಸಲಾಗಿದೆ.
ಪ್ರವೀಣ್ ಮದ್ದಡ್ಕ ಎಂಬ ಫೇಸ್ಬುಕ್ ಖಾತೆಯಲ್ಲಿ ಇಂತಹದೊಂದು ಪೋಸ್ಟ್ ಹಾಕಲಾಗಿದ್ದು ದಲಿತ ಸಂಘಟನೆಗಳು ಕಾನೂನು ಹೋರಾಟಕ್ಕೆ ನಿರ್ಧರಿಸಿವೆ.ದಲಿತ ಸಮುದಾಯವನ್ನು ಮತ್ತು ಸಂಘಟನೆಗಳ ಕಾರ್ಯಕರ್ತರು ಸ್ವಾಭಿಮಾನ ಮತ್ತು ಧರಿಸುವ ನೀಲಿ ಶಾಲಿನ ಬಗ್ಗೆ ನಿಂದಿಸಿ ಬರೆದ ಈ ಬರಹದ ವಿರುದ್ಧ ಕಡಬ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಲಿತ ಸಂಘಟನೆಗಳು ದೂರು ನೀಡಿದ್ದು ಆರೋಪಿ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿವೆ. ಸೌಜನ್ಯಪರ ಹೋರಾಟಗಾರರನ್ನು ನಿಂದಿಸುತ್ತಾ ಮುಂದುವರಿದು ಈ ಬರಹವನ್ನು ಬರೆಯಲಾಗಿದೆ,ಆದರೆ ‘ಪ್ರವೀಣ್ ಮದ್ದಡ್ಕ’ ಎಂಬ ಫೇಸ್ಬುಕ್ ಖಾತೆ ಅಸಲಿಯೋ ನಕಲಿಯೋ ಎಂಬ ಬಗ್ಗೆ ಸಂಶಯ ವ್ಯಕ್ತವಾಗಿದೆ.

Post Comment